Powered By Blogger

ಮಂಗಳವಾರ, ಜೂನ್ 15, 2021

ಓ ಸಂಚಾರಿ, ನಿಧಾನ


ಸಾಗರದಂತೆ ಹರಿದಾಡುತ್ತವೆ
ರಸ್ತೆಯಲ್ಲಿ ವಾಹನಗಳು
ಮನಬಂದತೆ ಓಡಾಡುತ್ತವೆ
ರಸ್ತೆಯಲ್ಲಿ ಜನಗಳು

ಸಾವಿರಾರು ಹೆಣಗಳುರುಳಿವೆ
ರಸ್ತೆಯಲ್ಲಿ, ಬರೀ ರಕ್ತದೋಕುಳಿ
ಹಲವರ ಅಂಗಗಳು ಕಳೆದಿವೆ
ರಸ್ತೆಯಲ್ಲಿ, ಬರೀ ರಕ್ತದ ಅಂಬಲಿ

ಮೊಜು ಮಾಡಲು ಹೊದವನು
ಒಡೆದ ಗಾಜಿನಂತೆ ಚೂರಾಗಿದ್ದಾನೆ
ಚೇಜು ಮಾಡಲು ಹೋದವನು
ಒಡೆದ ಬಲೂನಿನಂತೆ ಉಸಿರು ಬಿಟ್ಟಿದ್ದಾನೆ

ಕುದುರೆಯ ಸಾರಥಿಯಾದವನು
ಪಳಗಿಸಲು ಬಲ್ಲವನಾಗಿರಬೇಕು
ವಾಹನದ ಸವಾರಿಮಾಡುವನು
ಕವಚ ಕುಂಡಲಗಳ ಧರಿಸಿರಬೇಕು

ರಸ್ತೆ ಸುರಕ್ಷತಾ ಕ್ರಮಗಳನ್ನು ಪಾಲಿಸಿ
ಒಬ್ಬ ಒಳ್ಳೆಯ ಸಂಚಾರಿ ಎನಿಸಿ
ಅಪಘಾತ ಆದವರನು ಉಪಚರಿಸಿ
ನಿಧಾನವೇ ಪ್ರಧಾನವೆಂದು ಆಚರಿಸಿ

🖋ಮಂಜುನಾಥ ಸಿಂಗನ್ನವರ
ಸಾ// ತೆಗ್ಗಿಹಾಳ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕ್ರಿಕೆಟ್ ವಿಶ್ವಕಪ್ ೨೦೨೩

ಶುಭವಾಗಲಿ ನಿಮಗೆ ಶುಭವಾಗಲಿ ರೋಹಿತ್ ಬಳಗಕ್ಕೆ ಗೆಲುವಾಗಲಿ ಜಯವಾಗಲಿ , ನಿಮಗೆ ಜಯವಾಗಲಿ ಕ್ರಿಕೆಟ ವಿಶ್ವಕಪ್  ಇಂದು ನಮದಾಗಲಿ ರಾಹುಲ್ ದ್ರಾವಿಡರ ತರಬೇತಿಯಲ್ಲಿ ಭಾರತ ತಂಡ...