Powered By Blogger

ಭಾನುವಾರ, ಮೇ 30, 2021

ಅವಕಾಶಗಳ ಅಂತೆ ಕಂತೆ

 

ಅವಕಾಶಗಳಿಗೆ ಕಾದುಬೀಡು
ಮಳೆಗೆ ಕಾಯುವ ಚಾತಕ ಹಕ್ಕಿಯಂತೆ
ಅವಕಾಶಗಳಿಗೆ ಸನ್ನದ್ದನಾಗಿಬೀಡು
ಯದ್ದಕ್ಕೆ‌ ಸಿದ್ದನಿರೋ ಯೋಧನಂತೆ

ಅವಕಾಶಗಳನು ಬಿಡಬೇಡ
ಅವು ಆಕಾಶದ ನಕ್ಷತ್ರದಂತೆ
ಅವಕಾಶಗಳನು ಮರೆಯಬೇಡ
ಅವು ಕಸುವನ್ನು  ಮೆರೆಸುವ ಪೋಷಕನಂತೆ

ಬಂದ ಘಳಿಗೆಯನು ಗಾಳಿಗೆ ತೂರಬೇಡ
ಭದ್ರಮಾಡು ಗಿಜುಗನ ಗೂಡಿನಂತೆ
ಬಂದ ಅವಕಾಶವನು ಲಂಚಕೆ ಹಂಚಬೇಡ
ಉಂಡುಬೀಡು ನೀನೆ ಸ್ವಾಭಿಮಾನದ ಸಾಧಕನಂತೆ

ಅಪಕಾರ ಮಾಡಿದವನ ಪ್ರತಿಕಾರಕ್ಕೆ ಕಾದುಬೀಡು
ಮೋಸ ಮಾಡಿದ ಮೊಸಳೆಗೆ ಚಳ್ಳೆಹಣ್ಣು ತಿಣಿಸಿದ ಮಂಗನಂತೆ
ಅಧಿಕಾರ,ಆಸ್ತಿಯನ್ನು ಇರುವಾಗಲೇ ಉಳಿಸಿಬೀಡು
ಕಳೆದು ಹುಡುಕಬೇಡ ಭಾರತ ಕೊಹಿನೂರ ಹುಡುಕಿದಂತೆ

ಸಾವಿನಿಂದ ಪಾರಾದವನ ಕೇಳಿನೋಡು
ಉಸಿರಾಡಲು ಅವಕಾಶವಿದ್ದರಿಂದಲೇ ಬದುಕಿದನಂತೆ
ಅವಕಾಶವಂಚಿತ ಅಶಿಕ್ಷಿತರ ಬೇಟಿಮಾಡು
ಶಾಲೆಗೆ ಹೊಗಲಾಗದೇ ಸಾಲದಲ್ಲಿಯೇ ಸವೆದರಂತೆ

ಅವಕಾಶಗಳು ಅನವರತ ಇವೇ ಬಿಡು
ಆದರೆ ಅವುಗಳನ್ನು ಅರಗಿಸಿ ಕುಡಿದವನೇ ಅದೃಷ್ಟನಂತೆ
ಇಗಲಾದರೂ ಬದುಕಿಗೊಂದು ಅವಕಾಶಕೊಡು
ಬದುಕು ಮಿಣುಗುವುದು ಬಂಗಾರದಂತೆ

🖋ಮಂಜುನಾಥ ಸಿಂಗನ್ನವರ
ಸಾ||ತೆಗ್ಗಿಹಾಳ. ತಾ||ಸವದತ್ತಿ
ಜಿ||ಬೆಳಗಾವಿ   ಪಿನ್.೫೯೧೧೧೭
ಪೋನ್:೭೩೫೩೫೩೬೪೧೦



ಭಾನುವಾರ, ಮೇ 16, 2021

*ಸವಾಲುಗಳು ಬೇಕು ಬದುಕಿಗೆ*


ಸವಾಲುಗಳು ಬೇಕು ಬದುಕಿಗೆ

ಎದೆಯಲ್ಲಿ ಕಿಚ್ಚು ಹಚ್ಚಲು

ಮನದಲ್ಲಿ ಹುಚ್ಚು ಬೆಳೆಯಲು

ಸವಾಲುಗಳು ಬೇಕು ಸಾಧನೆಗೆ


ಬದುಕನು ಸುಮ್ಮನೇ ಸವೆಸಬೇಡಿ

ಗುರಿಯ ಕಡೆ ಗರಿಷ್ಟ ಗಮನಕೊಡಿ

 ಬರುವ ಸಮಸ್ಯೆಗಳಿಗೆ ಮೈಯೊಡ್ಡಿ

ಎಲ್ಲ ಸವಾಲುಗಳ ಗೆಲ್ಲು ಎದೆಯೋಡ್ಡಿ


ಸವಾಲುಗಳಿಲ್ಲದ ಜೀವನ ಸಾಗದೂ ದೂರ

ಸಾಗಬೇಕು ಬರುವ ಅಡೆ-ತಡೆಗಳೊಡೆದು ತೀರ

ಸವಾಲೇದುರಿಸಿದ ಜೀವಕೆ ಬೆಲೆಯಿದೆ ಅಪಾರ

ಸವಾಲುಗಳ ಗೆದ್ದಾಗ ನೀ ಜಗದಲಿ ಅಮರ


ಸಾಧಿಸಿದವರೆಲ್ಲ ಸವಾಲುಗಳನ್ನು ದಾಟಿದವರು

ಗೆದ್ದರೆ ಸಾಧಕರು,ಸೋತರೆ ಮಾರ್ಗದರ್ಶಕರು

ಮುಂದಿಟ್ಟ ಹೆಜ್ಜೆಯ ಎಂದಿಗೂ ಹಿಂದಿಡದಿರು

ಸವಾಲುಗಳ ಗೆದ್ದು ಬದುಕಿಗೊಂದು ಅರ್ಥತೋರು


🖋ಮಂಜುನಾಥ ಸಿಂಗನ್ನವರ

ಸಾ//ತೆಗ್ಗಿಹಾಳ  ತಾ//ಸವದತ್ತಿ

ಜಿ//ಬೆಳಗಾವಿ  ಪಿನ್//591117

ಪೋನ್:7353536410



ಜೀವ ಉಳಿಸು ಜೀವಾನಿಲ

 ಮರಗಳು ನೀಡುವವು ಜೀವಾನಿಲ

ಎಂದರಿತರೂ ಕಡಿದೇಯಾ ಮರಗಳ

ಮರಗಳೂ ಹೊಂದಿವೆ ಜೀವಗಳ

ಎಂದರಿತರೂ ಕೊಂದೆಯಾ ಅವುಗಳ


ಶುರುವಾಗಿದೆ ಅದರ ಪ್ರತಿಕಾರ

ದಿನೇದಿನೇ ಜೀವಾನಿಲಕ್ಕೆ ಹಾಹಾಕಾರ

ಅನಿಲವಿಲ್ಲದೆ ಪ್ರಾಣ ಹೋದವು ಸಾವಿರ

ಇನ್ನಾದರೂ ಮರಗಳ ಮೇಲಿರಲಿ ಮಮಕಾರ


ಮರಕಡಿದು ಗಳಿಸಿಟ್ಟ ಹಣಕ್ಕಿಗ ಬೆಲೆಯಿಲ್ಲ

ಆಮ್ಲಜನಕಕ್ಕೆ ಬೆಲೆಯಿಗ ಜಗದ ತುಂಬೆಲ್ಲಾ

ಜಗದೈಶ್ವರ್ಯಗಳ ಹೊಂದಿದವ ಸಿರಿವಂತನಲ್ಲ

ಆರೋಗ್ಯದಿಂದಿರುವನೇ ಸಿರಿವಂತನೆನಸಿದನಲ್ಲ!


ಪ್ರಾರ್ಥಿಸು ಇನ್ನಾದರೂ ಪೃಕೃತಿಯನು

ಹೊಂದು ಇನ್ನಾದರೂ ಮಾನವಿಯತೆಯನು

ಕ್ಷಮೆಯಾಚಿಸಿ ಪೂಜಿಸು ವಾಯು ದೇವನನ್ನು

ಆರೋಗ್ಯವಾಗಲಿ ಜನ ಸೋಲಿಸಿ ಹೆಮ್ಮಾರಿಯನು


🖊ಮಂಜುನಾಥ ಸಿಂಗನ್ನವರ

ಸಾ||ತೆಗ್ಗಿಹಾಳ. ತಾ||ಸವದತ್ತಿ

ಜಿ||ಬೆಳಗಾವಿ ಪಿನ||591117

ಪೋನ್:7353536410



ಶನಿವಾರ, ಮೇ 8, 2021

ಎದುರಾಗಬೇಡ ಇನ್ನೆಂದಿಗೂ

ಕಣ್ಮುಂದೆ ಬರಬೇಡ ಇನ್ನೇಂದಿಗೂ

ಒಡೆದಿರುವ ಹೃದಯವನ್ನು 

ಚೂರಾದ ಕನಸುಗಳನ್ನು

ಜೋಡಿಸಲು ಸಾಧ್ಯವೇ? ನಿನ್ನಿಂದ.


ಕಣ್ಮುಂದೆ ಬರಬೇಡ ಇನ್ನೇಂದಿಗೂ

ನುಂಗಿದ ನೋವುಗಳನ್ನು

ಬಂಧಿಸಿಟ್ಟ ನೆನಪುಗಳನ್ನು

ತೆರೆದಿಡಲು ಸಾಧ್ಯವೇ? ನಿನ್ನಿಂದ.


ಕಣ್ಮುಂದೆ ಬರಬೇಡ ಇನ್ನೇಂದಿಗೂ

ಪ್ರೀತಿಯ ಕಾರುಬಾರನು

ನನ್ನದೆಯ ಉತ್ಸವವನ್ನು

ತಂದುಕೊಡಲು ಸಾಧ್ಯವೇ? ನಿನ್ನಿಂದ


ಕಣ್ಮುಂದೆ ಬರಬೇಡ ಇನ್ನೇಂದಿಗೂ

ಕೈ,ಕೊಡುವ ಗುಣವನ್ನು

ಮೋಸಮಾಡುವ ಮಹಿಮೆಯನ್ನು

ಪ್ರೇಮಿಗಳು ಕಲಿಯಬೇಕೆ? ನಿನ್ನಿಂದ


ಕಣ್ಮುಂದೆ ಬರಬೇಡ ಇನ್ನೇಂದಿಗೂ

ಚೂರಾದರು ಹಂಚುವೆನು

ಮಿಕ್ಕುಳಿದ ಪ್ರೀತಿಯನು

ಜೋತೆಯಾಗಿರುವ ಸಂಗಾತಿಗೆ ನನ್ನಿಂದ.



🖊🖊ಮಂಜುನಾಥ ಸಿಂಗನ್ನವರ.


ಮಂಗಳವಾರ, ಮೇ 4, 2021

ಯಾರಿಗೇ ಇಲ್ಲಿ ಬೆಲೆ?

 

ಮನವೇ ನಿನ್ನ ತಲೇನೋವು ಕೇಳುವರು ಯಾರೂ ಇಲ್ಲ
ನೀ ಆನಂದದಿ,ರಾಜಾರೋಷವಾಗಿ ಇದ್ದರೇ ಇಲ್ಲಿ ಬೆಲೆ.

ಮನವೇ ನೀ ಬಡತನದಲ್ಲಿ ಬೆಂದರೂ ಕೇಳುವರಾರಿಲ್ಲ
ನೀ ಶ್ರೀಮಂತನಾಗಿ, ಸಿರಿಯಾದರೇ ಇಲ್ಲಿ ಬೆಲೆ

ಮನವೇ ನಿನ್ನ ಕಷ್ಟ-ನಷ್ಟ ಕೇಳುವವರು ಯಾರೂ ಇಲ್ಲ
ನೀ ಯಾವಾಗಲೂ ಲಾಭದಲ್ಲಿದ್ದರೇ ಇಲ್ಲಿ ಬೆಲೆ

ಮನವೇ ನಿನಗೆ ಮಾರ್ಗದರ್ಶನ ತೋರುವವರಾರಿಲ್ಲ
'ಅರಿವೇ ಗುರು' ಎಂಬುದರಿತರೇ ನಿನಗೆ ಇಲ್ಲಿ ಬೆಲೆ

ಮನವೇ ನಿನ್ನ ಪ್ರಕ್ಯಾತಿಯನ್ನು ಹೊಗಳುವವರಾರಿಲ್ಲ.
ನಿನಗೆ ನೀನೇ ಬಹುಮಾನ ಕೊಟ್ಟುಕೊಂಡು ಬಾಳಿದರೇ ಇಲ್ಲಿ ಬೆಲೆ

ಮನವೇ  ಒಳ್ಳೆಯ ನಡೆ-ನುಡಿಗೂ ಬೆಲೆಕೊಡುವವರಿಲ್ಲ
ನಿನ್ನ ಕಂತೆ ಕಂತೆ ಸುಳ್ಳಿನ ಮಾತಿಗೆ ಇಲ್ಲಿ ಬೆಲೆ

ಮನವೇ ನಿನ್ನ ಪಾಲನ್ನು ಯಾರು ತಂದು ಕೊಡುವವರಿಲ್ಲ
ನಿನ್ನ ಪಾಲಿಗೆ  ನೀನು ಹಕ್ಕುದಾರನೆಂದು ಬಂಡೆದ್ದರೇ ಇಲ್ಲಿ ಬೆಲೆ

ಮನವೇ ನಿನ್ನ ಜೀವನವನ್ನು ಉಧ್ಧರಿಸುವವರಾರಿಲ್ಲ
'ನಿನ್ನ ಜೀವನದ ನಿರ್ಮಾಪಕ ನೀನೇ' ಎಂದರಿತರೇ ಇಲ್ಲಿ ಬೆಲೆ

ಮನವೇ ಬರೀ ನಿನ್ನ ಸುಖವನ್ನೇ ಬಯಸದಿರು ಇಲ್ಲಿ
ಪರರ ಕಷ್ಟವನ್ನು ಕೇಳು,ದೇವನಾದರೂ ಕೊಡಬಹುದೇನೋ ನಿನಗಿಲ್ಲಿ ಬೆಲೆ
.

🖋🖋 
ಮಂಜುನಾಥ ಸಿಂಗನ್ನವರ.

ಶನಿವಾರ, ಮೇ 1, 2021

ಹರಡಬೇಡಿ ಸೋಂಕು


ಹರಡಬೇಡಿ ಜನರೇ ಕೋರಾನಾ ಸೋಂಕು
ಸಾವು-ಬದುಕಿನಾಟಕ್ಕೆ ಕಡಿವಾಣ ಹಾಕು
ಜಗ ಬದುಕಿಸುವುದಿದ್ದರೆ ಆರಡಿ ಅಂತರ ಬೇಕು
ಆಗಾಗ ಕೈ ತೊಳೆದು , ಮುಖಕ್ಕೆ ಮಾಸ್ಕನು ಹಾಕು

ಕೊಲ್ಲಬೇಡಿ ಜನರೇ ಭಯ ಉಂಟು ಮಾಡಿ
ರೋಗಿಯ ಸಂತೈಸಿ ಸೂಕ್ತ ಮಾರ್ಗದರ್ಶನ ನೀಡಿ
ಹತ್ತಿರದ ಆರೋಗ್ಯ ಕೇಂದ್ರಕ್ಕೆ ಬೇಟಿಕೊಡಿ
ಅರ್ಹ ಫಲಾನುಭವಿಯಾದರೆ ಕೊವಿಡ್ ಲಸಿಕೆ ಪಡಿ

ಮಸನಮಾಡಬೇಡಿ ಜನರೇ  ಈ ಸ್ವರ್ಗವನು
ತಪ್ಪದೇ ಪಾಲಿಸಿ ವೈಧ್ಯರ ಸೂಚನೆಯನು
ನಿಮ್ಮಂತೆ ಕಾಣಿ ಕರ್ತವ್ಯದ ಸಿಬ್ಬಂದಿಯನು
ಏಕೆಂದರೆ ತನ್ನುಸಿರು ಲೆಕ್ಕಿಸದೆ ದುಡಿಯುತಿಹನು

ಪಾಲನೆಮಾಡಿ ಜನರೇ ಔಷಧಿಯಿದ್ದಂಗೆ ಸೂಚನೆಗಳು
ತಪ್ಪದೇ ಎಚ್ಚರದಿಂದ ಅನ್ವಯವಾಗಲಿ ಕ್ರಮಗಳು
ಕೈ ಕೈ ಸೇರಿದರೆ ಚಪ್ಪಾಳೆಗಳು
ಹಾರಲಿ ವಾರಿಯರ್ ಗಳಿಗೆ ಹೂಗಳು



..🖋🖋ಮಂಜುನಾಥ ಸಿಂಗನ್ನವರ

ಕ್ರಿಕೆಟ್ ವಿಶ್ವಕಪ್ ೨೦೨೩

ಶುಭವಾಗಲಿ ನಿಮಗೆ ಶುಭವಾಗಲಿ ರೋಹಿತ್ ಬಳಗಕ್ಕೆ ಗೆಲುವಾಗಲಿ ಜಯವಾಗಲಿ , ನಿಮಗೆ ಜಯವಾಗಲಿ ಕ್ರಿಕೆಟ ವಿಶ್ವಕಪ್  ಇಂದು ನಮದಾಗಲಿ ರಾಹುಲ್ ದ್ರಾವಿಡರ ತರಬೇತಿಯಲ್ಲಿ ಭಾರತ ತಂಡ...