Powered By Blogger

ಭಾನುವಾರ, ಜೂನ್ 6, 2021

ಪರಿಸರ ಹೊಳೆಯಲಿ ಫಳಫಳ

 ಬಯಸಿದ್ದೆಲ್ಲವೂ ಬೇಕೆ ಮರುಳೆ

ಮಾವು,ಬೇವು,ಪೇರಲ,ನೇರಳೆ 

ಜೋತೆಗೆ ತಿಂದೆ ಮಾಂಸ ಮೂಳೆ

ಏನುಳಿಸಿದೆ? ಮಕ್ಕಳಿಗಿರಲಿ ನಾಳೆ


ಮರ ಕಡಿದು ಮನೆ ಹಾಕಿದೆ

ಕಾರ್ಖಾನೆಗಳಿಟ್ಟು ಹೊಗೆ ಸೂಸಿದೆ

ತ್ಯಾಜ್ಯಗಳ  ಬಿಟ್ಟು ಜಲಚರಗಳ ಕೊಂದೆ

ಏನುಳಿಸಿದೆ? ಬೆಳೆಸುವುದು ಬಿಟ್ಟು ಬೋಳಿಸಿದೆ


ಸ್ವಾರ್ಥಕ್ಕಾಗಿ ಪರಿಸರದ ಹಿತ ಮರೆಯಾಯ್ತು

ಕಣ್ಮುಂದೆ  ಇದ್ದ ಕಾನನ ಕಳೆದು ಹೊಯಿತು

ಶಿಕಾರಿಯ ಮೊಜಿನಲಿ ಪ್ರಾಣಿಗಳ ಬಲಿಯಾಯಿತು

ಏನುಳಿಸಿದೆ? ನಿನ್ನ ಪೀಳಿಗೆಗೆ ಇಲ್ಲದಾಯಿತು


ಪ್ರಾಣಿ-ಪಕ್ಷಿಗಳು ನೋಡಲು ಅಪರೂಪವಾಯ್ತು

ವನ-ಬನಗಳ ಹುಡುಕಾಡಿ ನೋಡುವುದಾಯ್ತು

ಪ್ಲಾಸ್ಟಿಕ ಬಳಸಿ ಭೂತಾಯಿಯ ಕಳೆ ಇಲ್ಲದಾಯ್ತು

ಏನುಳಿಸಿದೆ? ಕಾಗದಗಳ ಮರುಬಳಸು ಕಾಡು ಉಳಿದೀತು.









🖋ಮಂಜುನಾಥ ಸಿಂಗನ್ನವರ

ಸಾ// ತೆಗ್ಗಿಹಾಳ ತಾ// ಸವದತ್ತಿ

ಜಿ// ಬೆಳಗಾವಿ ಪಿನ್//೫೯೧೧೧೭

ಪೋನ್::೭೩೫೩೫೩೬೪೧೦

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕ್ರಿಕೆಟ್ ವಿಶ್ವಕಪ್ ೨೦೨೩

ಶುಭವಾಗಲಿ ನಿಮಗೆ ಶುಭವಾಗಲಿ ರೋಹಿತ್ ಬಳಗಕ್ಕೆ ಗೆಲುವಾಗಲಿ ಜಯವಾಗಲಿ , ನಿಮಗೆ ಜಯವಾಗಲಿ ಕ್ರಿಕೆಟ ವಿಶ್ವಕಪ್  ಇಂದು ನಮದಾಗಲಿ ರಾಹುಲ್ ದ್ರಾವಿಡರ ತರಬೇತಿಯಲ್ಲಿ ಭಾರತ ತಂಡ...