Powered By Blogger

ಭಾನುವಾರ, ಮೇ 16, 2021

ಜೀವ ಉಳಿಸು ಜೀವಾನಿಲ

 ಮರಗಳು ನೀಡುವವು ಜೀವಾನಿಲ

ಎಂದರಿತರೂ ಕಡಿದೇಯಾ ಮರಗಳ

ಮರಗಳೂ ಹೊಂದಿವೆ ಜೀವಗಳ

ಎಂದರಿತರೂ ಕೊಂದೆಯಾ ಅವುಗಳ


ಶುರುವಾಗಿದೆ ಅದರ ಪ್ರತಿಕಾರ

ದಿನೇದಿನೇ ಜೀವಾನಿಲಕ್ಕೆ ಹಾಹಾಕಾರ

ಅನಿಲವಿಲ್ಲದೆ ಪ್ರಾಣ ಹೋದವು ಸಾವಿರ

ಇನ್ನಾದರೂ ಮರಗಳ ಮೇಲಿರಲಿ ಮಮಕಾರ


ಮರಕಡಿದು ಗಳಿಸಿಟ್ಟ ಹಣಕ್ಕಿಗ ಬೆಲೆಯಿಲ್ಲ

ಆಮ್ಲಜನಕಕ್ಕೆ ಬೆಲೆಯಿಗ ಜಗದ ತುಂಬೆಲ್ಲಾ

ಜಗದೈಶ್ವರ್ಯಗಳ ಹೊಂದಿದವ ಸಿರಿವಂತನಲ್ಲ

ಆರೋಗ್ಯದಿಂದಿರುವನೇ ಸಿರಿವಂತನೆನಸಿದನಲ್ಲ!


ಪ್ರಾರ್ಥಿಸು ಇನ್ನಾದರೂ ಪೃಕೃತಿಯನು

ಹೊಂದು ಇನ್ನಾದರೂ ಮಾನವಿಯತೆಯನು

ಕ್ಷಮೆಯಾಚಿಸಿ ಪೂಜಿಸು ವಾಯು ದೇವನನ್ನು

ಆರೋಗ್ಯವಾಗಲಿ ಜನ ಸೋಲಿಸಿ ಹೆಮ್ಮಾರಿಯನು


🖊ಮಂಜುನಾಥ ಸಿಂಗನ್ನವರ

ಸಾ||ತೆಗ್ಗಿಹಾಳ. ತಾ||ಸವದತ್ತಿ

ಜಿ||ಬೆಳಗಾವಿ ಪಿನ||591117

ಪೋನ್:7353536410



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ಕ್ರಿಕೆಟ್ ವಿಶ್ವಕಪ್ ೨೦೨೩

ಶುಭವಾಗಲಿ ನಿಮಗೆ ಶುಭವಾಗಲಿ ರೋಹಿತ್ ಬಳಗಕ್ಕೆ ಗೆಲುವಾಗಲಿ ಜಯವಾಗಲಿ , ನಿಮಗೆ ಜಯವಾಗಲಿ ಕ್ರಿಕೆಟ ವಿಶ್ವಕಪ್  ಇಂದು ನಮದಾಗಲಿ ರಾಹುಲ್ ದ್ರಾವಿಡರ ತರಬೇತಿಯಲ್ಲಿ ಭಾರತ ತಂಡ...