Powered By Blogger

ಭಾನುವಾರ, ಮೇ 30, 2021

ಅವಕಾಶಗಳ ಅಂತೆ ಕಂತೆ

 

ಅವಕಾಶಗಳಿಗೆ ಕಾದುಬೀಡು
ಮಳೆಗೆ ಕಾಯುವ ಚಾತಕ ಹಕ್ಕಿಯಂತೆ
ಅವಕಾಶಗಳಿಗೆ ಸನ್ನದ್ದನಾಗಿಬೀಡು
ಯದ್ದಕ್ಕೆ‌ ಸಿದ್ದನಿರೋ ಯೋಧನಂತೆ

ಅವಕಾಶಗಳನು ಬಿಡಬೇಡ
ಅವು ಆಕಾಶದ ನಕ್ಷತ್ರದಂತೆ
ಅವಕಾಶಗಳನು ಮರೆಯಬೇಡ
ಅವು ಕಸುವನ್ನು  ಮೆರೆಸುವ ಪೋಷಕನಂತೆ

ಬಂದ ಘಳಿಗೆಯನು ಗಾಳಿಗೆ ತೂರಬೇಡ
ಭದ್ರಮಾಡು ಗಿಜುಗನ ಗೂಡಿನಂತೆ
ಬಂದ ಅವಕಾಶವನು ಲಂಚಕೆ ಹಂಚಬೇಡ
ಉಂಡುಬೀಡು ನೀನೆ ಸ್ವಾಭಿಮಾನದ ಸಾಧಕನಂತೆ

ಅಪಕಾರ ಮಾಡಿದವನ ಪ್ರತಿಕಾರಕ್ಕೆ ಕಾದುಬೀಡು
ಮೋಸ ಮಾಡಿದ ಮೊಸಳೆಗೆ ಚಳ್ಳೆಹಣ್ಣು ತಿಣಿಸಿದ ಮಂಗನಂತೆ
ಅಧಿಕಾರ,ಆಸ್ತಿಯನ್ನು ಇರುವಾಗಲೇ ಉಳಿಸಿಬೀಡು
ಕಳೆದು ಹುಡುಕಬೇಡ ಭಾರತ ಕೊಹಿನೂರ ಹುಡುಕಿದಂತೆ

ಸಾವಿನಿಂದ ಪಾರಾದವನ ಕೇಳಿನೋಡು
ಉಸಿರಾಡಲು ಅವಕಾಶವಿದ್ದರಿಂದಲೇ ಬದುಕಿದನಂತೆ
ಅವಕಾಶವಂಚಿತ ಅಶಿಕ್ಷಿತರ ಬೇಟಿಮಾಡು
ಶಾಲೆಗೆ ಹೊಗಲಾಗದೇ ಸಾಲದಲ್ಲಿಯೇ ಸವೆದರಂತೆ

ಅವಕಾಶಗಳು ಅನವರತ ಇವೇ ಬಿಡು
ಆದರೆ ಅವುಗಳನ್ನು ಅರಗಿಸಿ ಕುಡಿದವನೇ ಅದೃಷ್ಟನಂತೆ
ಇಗಲಾದರೂ ಬದುಕಿಗೊಂದು ಅವಕಾಶಕೊಡು
ಬದುಕು ಮಿಣುಗುವುದು ಬಂಗಾರದಂತೆ

🖋ಮಂಜುನಾಥ ಸಿಂಗನ್ನವರ
ಸಾ||ತೆಗ್ಗಿಹಾಳ. ತಾ||ಸವದತ್ತಿ
ಜಿ||ಬೆಳಗಾವಿ   ಪಿನ್.೫೯೧೧೧೭
ಪೋನ್:೭೩೫೩೫೩೬೪೧೦



2 ಕಾಮೆಂಟ್‌ಗಳು:

ಕ್ರಿಕೆಟ್ ವಿಶ್ವಕಪ್ ೨೦೨೩

ಶುಭವಾಗಲಿ ನಿಮಗೆ ಶುಭವಾಗಲಿ ರೋಹಿತ್ ಬಳಗಕ್ಕೆ ಗೆಲುವಾಗಲಿ ಜಯವಾಗಲಿ , ನಿಮಗೆ ಜಯವಾಗಲಿ ಕ್ರಿಕೆಟ ವಿಶ್ವಕಪ್  ಇಂದು ನಮದಾಗಲಿ ರಾಹುಲ್ ದ್ರಾವಿಡರ ತರಬೇತಿಯಲ್ಲಿ ಭಾರತ ತಂಡ...